Vijayasiri News
ನಮ್ಮೂರ ಸುದ್ದಿವಿಜಯನಗರ

|| ಕೆರೆಗುಡಿಹಳ್ಳಿ: ಗ್ರಾಮಸ್ಥರ ಪಾಲಿಗೆ ಕಂಟಕವಾಗಿದ್ದ ಹೂಳು ತುಂಬಿದ ಚರಂಡಿ || ಕೊನೆಗೂ ಹೂಳು ತೆರೆವುಗೊಳಿಸಲು ಮುಂದಾದ ಪಂಚಾಯ್ತಿ ಸದಸ್ಯ

ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಅದು ನಿತ್ಯವೂ ಜನಸಂದಣಿಯಿಂದ ಕೂಡಿದ ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಆಯಕಟ್ಟಿನ ಪ್ರಮುಖ ಪ್ರದೇಶ. ಇದೇ ಆಯಕಟ್ಟಿನ ಕೇಂದ್ರದಲ್ಲಿಯೇ ಬಸ್‌ನಿಲ್ದಾಣವೂ ಇದೆ. ಹೀಗಾಗಿಯೇ, ಈ ಪ್ರದೇಶವನ್ನು ಬಹುತೇಕರು ಅವಲಂಬಿಸಿಕೊಂಡೇ ತಮ್ಮ ಕೆಲಸ; ಕಾರ್ಯಗಳಿಗೆ ಹೋಗುತ್ತಾರೆ. ಆದರೆ, ಈ ಪ್ರದೇಶದಲ್ಲಿ ಹಾದುಹೋಗಿರುವ ಚರಂಡಿಯ ಹೂಳನ್ನು ಸಂಬಂಧಿಸಿದ ಗ್ರಾಮಪಂಚಾಯ್ತಿ ಅಧಿಕಾರಿಗಳು ಕಾಲಕಾಲಕ್ಕೆ ಶುಚಿಗೊಳಿಸದ ಹಿನ್ನೆಲೆಯಲ್ಲಿ ಚರಂಡಿ ಕೆಟ್ಟವಾಸನೆ ಹೊರಸೂಸುವ ಅನೈರ್ಮಲ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಮಧ್ಯೆ, ಇದೇ ಚರಂಡಿಯಲ್ಲಿ ಬೀದಿ ನಾಯಿಯೊಂದು ಸತ್ತುಬಿದ್ದ ಪರಿಣಾಮ ಈ ಪ್ರದೇಶವೆಂಬುದು ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ರೂಪಾಂತರವಾಗಿತ್ತು, ಇಲ್ಲಿನ ಸಂಚರಿಸುವವರ ಪಾಲಿಗೆ ನರಕಯಾತನೆ ಅನುಭವಿಸುವ ಸ್ಫಾಟ್‌ನಂತೆ ಮಾರ್ಪಾಡಾಗಿತ್ತು…..!
ದೈನಂದಿನ ಕೆಲಸ; ಕಾರ್ಯಗಳಿಗೆ ಹೊರಡುವ ಸಾರ್ವಜನಿಕರು, ಬಸ್‌ಗಾಗಿ ಕಾಯುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಪ್ರದೇಶ ಸಮೀಪಿಸುತ್ತಿದ್ದಂತಿಯೇ, ಮುಖವಸ್ತç ಇಲ್ಲವೇ ಟವೆಲ್‌ಗಳಿಂದ ಮೂಗುಮುಚ್ಚಿಕೊಂಡು, ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು, ಹೊಸಕೋಟೆ ಪಂಚಾಯ್ತಿ ಕಚೇರಿಗೆ ತಿಳಿಸಿದರೂ, ತಿಳಿಸಿದರೂ, ಪಂಚಾಯ್ತಿ ಆಡಳಿತ ಮಂಡಳಿ ಸಕಾಲದಲ್ಲಿ ಸ್ಪಂದಿಸಿರಲಿಲ್ಲ. ಹೀಗಾಗಿ, ಚರಂಡಿಯ ಪರಿಸ್ಥಿತಿಯನ್ನು ಪಂಚಾಯ್ತಿ ಸದಸ್ಯ ಕಬ್ಬಳ್ಳಿ ನಾಗರಾಜ ಅವರ ಕಿವಿಗೆ ಹಾಕುತ್ತಿದ್ದಂತಿಯೇ, ಕೂಡಲೇ ಕಾರ್ಯೋನ್ಮುಖರಾದ ನಾಗರಾಜ ಅವರು, ಪಂಚಾಯ್ತಿ ಸಿಬ್ಬಂದಿಗೆ ದೂರವಾಣಿ ಕರೆಮಾಡುವ ಮೂಲಕ ಗ್ರಾಮಸ್ಥರು, ಅನುಭವಿಸುತ್ತಿರುವ ಯಾತನೆಯನ್ನು ವಿವರಿಸಿ, ಕಾರ್ಮಿಕರನ್ನು ಕಳುಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಸದಸ್ಯ ನಾಗರಾಜ ಅವರು ಸೂಚಿಸುತ್ತಿದ್ದಂತಿಯೇ ಫುಲ್ ಅಲರ್ಟ್ ಆದ ಅಧಿಕಾರಿಗಳು, ಕೂಡಲೇ, ಕಾರ್ಮಿಕರನ್ನು ಕೆರೆಗುಡಿಹಳ್ಳಿ ಗ್ರಾಮಕ್ಕೆ ಕಳುಹಿಸಿದ್ದಾರೆ. ಬಳಿಕ, ಸದಸ್ಯ ಕಬ್ಬಳ್ಳಿ ನಾಗರಾಜ ಅವರು, ಕಾರ್ಮಿಕರನ್ನು ಆ ಪ್ರದೇಶಕ್ಕೆ ಕರೆದೊಯ್ದು, ಚರಂಡಿಯಲ್ಲಿ ಸತ್ತು ಬಿದ್ದಿದ್ದ ಬೀದಿ ನಾಯಿಯ ದೇಹವನ್ನು ಊರ ಹೊರಗೆ ಸಾಗಿಸಿದ್ದಾರೆ. ಆ ನಂತರ, ಚರಂಡಿಯನ್ನು ಶುಚಿಗೊಳಿಸಿ, ಅಕ್ಕಪಕ್ಕದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಂಟೆ ಹಾಗೂ ಕಸವನ್ನು ತೆರವುಗೊಳಿಸಿ, ಮಲೀನ ನೀರು ಸಾರಾಗವಾಗಿ ಹರಿದುಹೋಗುವಂತೆ ಕ್ರಮವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಕಬ್ಬಳ್ಳಿ ನಾಗರಾಜ, ಕೆಲ ಸಮಸ್ಯೆಗಳು ನಮಗೆ ಮಾಹಿತಿ ಬರದಂತೆ ಮರೆಯಾಗಿಬಿಡುತ್ತವೆ. ಹೀಗಾಗಿ, ನಮ್ಮ ಗ್ರಾಮದ ಸಣ್ಣ ಮಗುವಿನಿಂದ ಹಿಡಿದು, ಯಾರೇ ಆಗರಲಿ, ತಕ್ಷಣ ಮಾಹಿತಿ ಒದಗಿಸಬೇಕು ಎಂದು ಕೋರಿದ ಅವರು, ನಾನು ಈ ಕೆರೆಗುಡಿಹಳ್ಳಿ ಗ್ರಾಮದ ಮಗ. ಇಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ಮಧ್ಯರಾತ್ರಿಯಲಿ ಫೋನ್ ಕರೆಮಾಡಿದರೂ, ಆ ಕ್ಷಣದಲ್ಲಿ ನಾನು ಅಲ್ಲಿರುತ್ತೇನೆ. ಇದರಲ್ಲಿ ಅನುಮಾನವೇ ಬೇಡ. ಹೀಗಾಗಿಯೇ, ಜನ ನನ್ನ ಮೇಲೆ ನಂಬಿಕೆ ಇಟ್ಟು ಗ್ರಾಮದ ಸೇವೆಯನ್ನು ಮಾಡಲು ಅವಕಾಶ ಕೊಟ್ಟಿದ್ದಾರೆ. ಗ್ರಾಮಸ್ಥರು ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವುದು ನನ್ನ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಿ.ಎಸ್. ವೀರೇಶ್, ಪಿ. ತಿಪ್ಪೇಶ್, ವಕೀಲ ಎನ್. ನಾಗರಾಜ್ ಸೇರಿದಂತೆ ಇತರರು ಇದ್ದರು.

Related posts

ಅಣಜಿಗೆರೆ ಗ್ರಾಮದಲ್ಲಿ ರಕ್ತದಾನ ಶಿಬಿರ

admin

|| ಕೋಡಿಬಿದ್ದ ಕಲ್ಲಹಳ್ಳಿ ಕೆರೆ|| ಹರಪನಹಳ್ಳಿ: ಧಾರಾಕಾರ ಮಳೆ, ಮೈದುಂಬಿ ಹರಿಯುತ್ತಿವೆ ಕೆರೆ-ಕಟ್ಟೆಗಳು

Vijayasiri News

ಹರಪನಹಳ್ಳಿ: ಹಲುವಾಗಲು ಸಿಂಧೋಳ್ ಸಮುದಾಯದ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನಿವೇಶನಕ್ಕೆ ಚಿಂತನೆ: ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ

Vijayasiri News

ಹರಪನಹಳ್ಳಿ: ವಾಲ್ಮೀಕಿನಾಯಕ ಸಮಾಜದ ನೌಕರರ ಸಂಘದ ಆಶ್ರಯದಲ್ಲಿ ಪ್ರತಿಭಾಪುರಸ್ಕಾರ, ಸಾಂದಾರ್ಭಿಕ ಸನ್ನೀವೇಶದ ಪ್ರಭಾವಳಿಯಲ್ಲಿ ಮಾನವೀಯಮೌಲ್ಯಗಳ ಉಪೇಕ್ಷೆ ಸಲ್ಲದು: ಡಾ.ಪ್ರಸನ್ನಾನಂದ ಸ್ವಾಮೀಜಿ

Vijayasiri News

ಕಂಚಿಕೆರೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗೆ ಮನವಿ

admin

ಅಭಿವೃದ್ಧಿ ಹೆಸರಿನಲ್ಲಿ ಅಲಂಕಾರಿಕ ಗಿಡಗಳ ಹರಣ: ನಗರಸಭೆ ನೇತೃತ್ವದಲ್ಲಿಯೇ ಪ್ರಾಕೃತಿಕ ಆಮ್ಲಜನಕಕ್ಕೆ ಕತ್ತರಿ; ಸಾರ್ವಜನಿಕರ ಆಕ್ರೋಶ

Vijayasiri News
error: Content is protected !!